ಮಂಗಳವಾರ, ಫೆಬ್ರವರಿ 9, 2010

ಅಪ್ಪ ಕೊಟ್ಟ್ದಿದ ಐದು ಪೈಸೆ

ಕಾಳ ಕೂತ್ಲಲಿಂದ ಕದಲಲು ಮನಸಾಗದೇ ಹೆಜ್ಜೆಗಳೆರಡನ್ನು ಅತ್ತಿತ್ತ ಆಡಿಸಿ ಕೊಸರಿಕೊಂಡನು. ಸಣ್ಣಗೆ ಇಣುಕುತ್ತ್ದಿದ ಸೂರ್ಯನ ಚಳಿ ಓಡಿಸುವ ಸಾಹಸದ್ಲಲಿ ಅಡ್ಡಲಾಗಿ ತೆಂಗಿನ ಮರದ ಗರಿಯೊಂದು ಅತ್ತಿತ್ತ ಆಡುತ್ತಾ ಬಳಕುತ್ತಿತ್ತು. ಕಾಳನ ಮೇಲೆ ಬೀಳುತ್ತ್ದಿದ ಬಿಸಿಲಿಗೆ ಅದು ತಡೆ ಒಡ್ಡಿತ್ತು, ಮನಸ್ಸಿನ್ಲಲೇ ತೆಂಗಿನ ಗರಿಯನ್ನು ಬೈಯ್ದುಕೊಂಡು ಕಾಳ ಸ್ವಲ್ಪ ಆ ಕಡೆಗೆ ಕುಳಿತಂತೆಯೇ ಜರುಗಿಕೊಂಡ. ಅವ್ವ ಕೂಗುವ ಮುಂಚೆ ಹ್ಲಲುಜ್ಜಿ ಶಾಲೆಗೆ ಸಿದ್ಧವಾಗಬೇಕೆಂದು ಮನಸ್ಸ್ಲಲೇ ಲೆಕ್ಕಚಾರ ಹಾಕಿಕೊಂಡ.

ಅಪ್ಪ ಸತ್ತು ಒಂದು ತಿಂಗಳು ಕಳೆಯುತ್ತಾ ಬಂದಿತ್ತು. ತಾತನನ್ನು ಅಪ್ಪ ಎಂದೂ ಅಪ್ಪನನು ಅಣ್ಣ ಎಂದು ಕರೆಯವುದು ಕಾಳನಿಗೆ ಗೊತ್ತ್ಲಿಲದೇ ಬಾಯಿ ಪಾಠವಾಗಿತ್ತು. ಅವ್ವ ಹೇಳಿಕೊಟ್ಟ್ದಿದು ಆಗೆಯೇ. ಊರ‍್ಲಲಿ ಎಲ್ರು ಅಪ್ಪನನ್ನು ಅಪ್ಪ ಎಂದೇ ಕರೆಯುತ್ತ್ದಿದರೆ ತಾನು ಮಾತ್ರ ಅಣ್ಣ ಅಂತ ಕರೆಯವುದು ಏಕೆ ಎಂಬ ಪ್ರಶ್ನೆ ಕಾಳನ್ಲಲಿ ಅನೇಕ ಸಲ ಬಂದುಹೋಗಿತ್ತು.
ಮತ್ತೇ ಕಾಳ ಚೆಡ್ಡಿ ತಡವಿಕೊಂಡ. ಅಪ್ಪ ಕೊಟ್ಟ್ದಿದ ಐದು ಪೈಸೆ ಜೇಬಿನ ಮೂಲೆಯ್ಲಲಿ ತಣ್ಣಗೆ ಕೂತುಕೊಂಡ್ದಿದನ್ನು ಖಚಿತಪಡಿಸಿಕೊಂಡು ಮತ್ತೇ ನೆನಪಿಗೆ ಜಾರಿದ.

ಅಪ್ಪನ ಬಾಯ್ಲಲಿ ಕಾಳ ಮನೋವರ ಆಗ್ದಿದ. ಅಪ್ಪ ಯಾವೊತ್ತು ಕಾಳ ಎಂದೇ ಕರೆದ್ದಿದೇ ಇಲ. ಅವ್ವ, ಅಣ್ಣ ಇಬ್ಬರು ಜತೆ ಸೇರಿ ಪ್ರೀತಿಯಿಂದ ಮನೋವರ ಎಂದೇ ಹೆಸರು ಇಟ್ಟ್ದಿದು. ಆದರೆ ಊರವರ ಬಾಯ್ಲಲಿ, ಅಷ್ಟೇ ಏಕೆ ಕೊನೆಗೆ ಅವ್ವ, ಅಪ್ಪನ ಬಾಯ್ಲಲೂ ಮನೋವರ ಈಗ ಕಾಳನೇ ಆಗಿ ರೂಪಾಂತರವಾಗಿ ಬಿಟ್ಟ್ದಿದಾನೆ. ಮನೆಯ್ಲಲಿ ಕಿತ್ತು ತಿನ್ನುತ್ತ್ದಿದ ಬಡತನ, ಯಾವಾಗಲೂ ಹಸಿದೇ ಇರಬೇಕಾದ ಅನುಭವ ಕಾಳನಿಗೆ ಮೊದಲಿನಿಂದಲೂ ಆಗಿತ್ತು.

ಬಡತನದ ಹಸಿವು ಮನೋವರನನ್ನು ಕಾಳನೆಂಬ ಅಡ್ಡ ಹೆಸರಿಗೆ ದೂಡಿತ್ತು. ಅಷ್ಟು ಚೆಂದನೆಯ ಹೆಸರು ಇದರೂ ಊರವರು ಅಡ್ಡ ಹೆಸರಿನಿಂದಲೇ ಅವನನ್ನುಕರೆಯುತ್ತ್ದಿದ್ದದು ಕಂಡು ಅನೇಕ ಸಲ ಸಿಟ್ಟು ಬಂದಿತ್ತು. ಆದರೆ ಅವನಿಗೆ ಸಾಕಷ್ಟು ಬ್ದುದಿ ಮೂಡುವ ಹೊತ್ತಿಗೆ ಅಂದರೆ ನಾಲ್ಕನೇ ತರಗತಿಗೆ ಕಾಲಿಡುವ ಮುನ್ನವೇ ಮನೋವರ ಕಾಳನಾಗಿ ಪ್ರಸಿದ್ಧಿಯಾಗಿ ಬಿಟ್ಟ್ದಿದನು.

ಮನೋವರ ಕಾಳ ಆಗ್ದಿದಕ್ಕೂ ಒಂದು ಕಥೆ ಇದೆ. ಪ್ರತಿ ವರ್ಷದಂತೆ ಆ ವರ್ಷವೂ ಊರ‍್ಲಲಿ ದೊಡ್ಡಮ್ಮ ಜಾತ್ರೆ ಸಡಗರದಿಂದ ನಡೆದಿತ್ತು. ಜಾತ್ರೆಯ ಹಿಂದಿನ ದಿನ ಕಾಲಘಟ್ಟಮ್ಮನ ಪೂಜೆ. ಪ್ರತಿ ಮನೆಯವರೂ ದೇವರಿಗೆ ಬೇಯಿಸಿದ ಅವರೆ ಕಾಳು ಹರಕೆಯಾಗಿ ಒಪ್ಪಿಸುವುದು ವಾಡಿಕೆ. ಆದರಂತೆ ದೇವರ ಮುಂದೆ ರಾಶಿರಾಶಿಯಾಗಿ ಅವರೇಕಾಳು ಬೀಳುತ್ತದೆ. ಅವರೆಕಾಳು ದೇವರಿಗೆ ಮುಡಿಹಾಸುವ ಅಗಸರಿಗೆ ಸೇರಬೇಕು. ಆ ಕಾಳನ್ನು ಮುಟ್ಟುವುದಾದಲಿ, ತಿನ್ನುವುದಾಗಲೀ ಮಾಡುವಂತ್ಲಿಲ. ಹಬ್ಬ ಆದರೂ ಮನೆಯ್ಲಲಿ ಅವ್ವ ಅಡುಗೆ ಮಾಡಿರಲ್ಲಿಲ. ಪಕ್ಕದ ಮನೆಯವರಿಂದ ಕೈಗಡವಾಗಿ ತೆಗೆದುಕೊಂಡ ಬಂದ ಕಾಳನ್ನು ದೇವರಿಗೆ ಬೇಯಿಸಿ ನೀಡಲಾಗಿತ್ತು.

ಬೆಳಿಗ್ಗೆಯಿಂದಲೂ ಹಸಿವಿನಿಂದ ಕಂಗಲಾಗ್ದಿದ ಕಾಳ ದೇವರ ಗುಡಿಗೆ ಹೋಗ್ದಿದಾಗ ಹೊಟ್ಟೆ ಹಸಿವು ತಡೆಯಲು ಆಗಲೇ ಇಲ. ಕಣ್ಮುಂದೆ ದೊಡ್ಡಮ್ಮ ದೇವತೆಗೆ ನೀಡ್ದಿದ ಅವರೇ ಕಾಳುಗಳ ರಾಶಿಯೇ ಬ್ದಿದಿರುವಾಗ ಅವನ ಹೊಟ್ಟೆ ಹಸಿವಾದರೂ ಅವುಡಿಗಚ್ಚಿ ಕುಳಿತಿಕೊಳ್ಳಲು ಹೇಗೆ ಸಾಧ್ಯ? ಹೊಟ್ಟೆಯ ಹಸಿವಿನ ಮುಂದೆ ಮರ್ಯಾದೆ ತನ್ನತನವನ್ನು ಯಾವೊತ್ತು ಉಳಿಸಿಕೊಳ್ಳಲಾರದು. ಮನೋವರ ಯಾರಿಗೂ ಕಾಣದು ಎಂದು ತಿಳಿದು ಅವರೇಕಾಳು ರಾಶಿಯಿಂದ ಕ್ದದುಕ್ದದು ಅವರೇ ಕಾಳು ತಿನ್ನುತ್ತ್ದಿದ. ಅದನ್ನು ಗಮನಿಸಿದ ಅಗಸರ ಲಕ್ಷ್ಮಕ್ಕ ಕೂಗಾಡ್ದಿದಳು. ಆವೊತ್ತಿನಿಂದ ಮನೋಹರನ್ನು ಊರವರು ಕಾಳ, ಕಾಳ ಎಂದು ಹಂಗಿಸಲು ಶುರು ಹಚ್ಚಿದರು.

ಮೊದಮೊದಲಿಗೆ ಜನರು ಕಾಳ ಎಂದು ಕೂಗುವುದಕ್ಕೆ ತನ್ನ ಅಸಹಾಯಕ ಸಿಟ್ಟನ್ನು ಮನೋಹರ ತೋರ‍್ದಿದನು. ಆದರೆ ‘ಬಡವನ ಸಿಟ್ಟು ದವಡೆಗೆ ಮೂಲ’ ಎಂಬಂತೆ ಊರವರು ಹೀಯಾಳಿಕೆಗೆ ಒಳಗೊಳಗೆ ಕೋಪ ಬರುತ್ತ್ದಿದರು ಮನೋವರ ಅದನ್ನು ತೋರಗೊಡದೇ ನಿಧಾನವಾಗಿ ಕಾಳನಾಗಿಯೇ ರೂಪಾಂತರ ಆಗಿಬಿಟ್ಟನು. ಈಗ ಅವನನ್ನು ಅವರವ್ವ. ಅಪ್ಪ ಕೂಡ ಕಾಳ ಎಂದರೂ ಬೇಸರ ಆಗುವುದ್ಲಿಲ. ಶಾಲೆಯ್ಲಲಿ ಮೇಷ್ಟುರು ಬಿಟ್ಟರೆ ಉಳಿದವರ‍್ಲೆಲರ ಬಾಯ್ಲಲೂ ಮನೋಹರ ಕಾಳ ಆಗ್ದಿದಾನೆ. ಮೇಷ್ಟರು ಕೂಡ ಹಾಜರಾತಿ ಕರೆಯುವಾಗ ಮಾತ್ರ ಮನೋವರ ಎಂದು ಕೂಗುತ್ತಾರೆ ಹೊರತು ಉಳಿದಂತೆ ಅವರ ಬಾಯ್ಲಲೂ ಅವನು ಕಾಳನೇ ಆಗಿಹೋಗ್ದಿದಾನೆ. ಆದರೆ ಅಪ್ಪ ಮಾತ್ರ ಅವನನ್ನು ಎಂದು ಕೂಡ ಕಾಳ ಎಂದು ಕರದೇ ಇಲ. ಹೀಗಾಗಿಯೇ ಅಪ್ಪ ಎಂದರೆ ಕಾಳನಿಗೆ ವಿಶೇಷ ಪ್ರೀತಿ, ಮನೋವರ ಎಂದಾಗ ಅವನ್ಲಲಿ ಆಗುವ ಖುಷಿ, ದೊಡ್ಡಸ್ತಿಕೆ ಕಾಳ ಎಂದು ಕರೆವಾಗ ಇರುವುದ್ಲಿಲ. ಯಾವಾಗಲೂ ಅಪ್ಪ ಮನೋವರ ಎಂದು ಕೂಗುತ್ತಲೇ ಇದರೆ ಎಷ್ಟು ಚೆಂದ ಎಂದು ಕಾಳ ಎಷ್ಟೋ ಸಲ ಅಂದುಕೊಂಡ್ದಿದನು.

ಹುಷಾರು ತಪ್ಪಿ ಹಾಸಿಗೆ ಹಿಡಿದ್ದಿದ ಅಪ್ಪನನ್ನು ನೋಡಲು ಫರ್ಲಾಂಗು ದೂರವ್ದಿದ ದೊಡ್ಡಮ್ಮನ ಮನೆಗೆ ಹೋಗ್ದಿದಾಗ ‘ನಿಂಗೆ ಯಾರು ಆಗ್ಲಲ ಮರಿ. ನಿನ್ನ ದೊಡ್ಡಪ್ಪನ ಮಕ್ಕಳನ್ನು ನಂಬಬೇಡ. ನಿನ್ನ ಬ್ದುದಿ ನಿನ್ನ ಕೈಯ್ಲಲಿರಲಿ. ಯಾರ‍್ಗೂ ಹೇಳಬೇಡ’ ಎಂದು ದಿಂಬಿನ ತಡಿಯ್ಲಲಿ ಮಡಗ್ದಿದ ಐದು ಪೈಸೆಯನ್ನು ಬಲವಂತವಾಗಿ ಕೈಗೆ ಗಿಡುಗಿತ್ತು. ಐದು ಪೈಸೆಗೆ ಒಂದು ದೊಡ್ಡ ಶುಂಠಿ ಪೆಂಪರ್‌ಮೆಂಟ್ ಕೊಂಡು ತಿನ್ನಬಹುದಾದರೂ ಕಾಳ ಅದನ್ನು ಖರ್ಚು ಮಾಡಿರಲ್ಲಿಲ. ಅವನ ಹದಿನಾಲ್ಕು ವರ್ಷದ್ಲಲಿ ಅಪ್ಪ ಕೊಟ್ಟ್ದಿದು ಐದು ಪೈಸೆ ಮಾತ್ರ. ಐದು ಪೈಸೆ ಕೊಟ್ಟು ಆತ್ಮಹತ್ಯೆಗೆ ಜಾರ‍್ದಿದ ಅಪ್ಪ ಈಗ ಕಾಳನಿಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದ.

ಅಪ್ಪ ಇದ್ದದು ಕಾಳನ ದೊಡ್ಡಮ್ಮನ ಮನೆಯ್ಲಲಿ. ಮನೆ ಭಾಗ ಆದ ಮೇಲೆ ಅಪ್ಪ ದೊಡ್ಡ ಮಗಳ ಮನೆಯ್ಲಲೇ ಉಳಿದುಕೊಂಡಿತು. ಚಿಕ್ಕಮಗಳಿಗೆ ಆಸ್ತಿಯ್ಲಲಿ ದೊಡ್ಡ ಪಾಲು ಕೊಡದ ಕಾರಣ ಒಂದೇ ಊರ‍್ಲಲಿ ಹೆಣ್ಣು ಮಕ್ಕಳಿಬ್ಬರ ಮನೆಗಳ್ದಿದರೂ ಅಪ್ಪ ದೊಡ್ಡಮ್ಮ ಮನೆಯ್ಲಲೇ ಉಳಿದುಕೊಂಡಿತು. ಮನೆ ಅಳಿಯನಾಗಿ ಸೇರಿಕೊಂಡ್ದಿದ ಅಪ್ಪನಿಗೆ ಮೊದಲಿನಿಂದಲೂ ಸಿಕ್ಕ ಸ್ವಾತಂತ್ರ್ಯ ಅಷ್ಟಕಷ್ಟೇ ಎನ್ನಬೇಕು. ದುಡಿದ ಹಣವನ್ನು ಅಜ್ಜಿಯ ಕೈಗೆ ಕೊಡಬೇಕಾಗಿತ್ತು. ಅಜ್ಜಿಯದೇ ಯಜಮಾನಿಕೆ. ಬೊಂಡ, ಕೇಸರಿಭಾತ್ ಇಷ್ಟಪಡುತ್ತ್ದಿದ ಅಪ್ಪ ಒಮ್ಮೆ ಭಟ್ಟರ ಹೋಟೆಲಿನ್ಲಲಿ ಇಪ್ಪತ್ತು ರೂಪಾಯಿವರೆಗೂ ಸಾಲ ಮಾಡಿ ಮನೆಯ್ಲಲಿ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿತ್ತು. ಅವ್ವನಿಗೂ, ಅಪ್ಪನಿಗೂ ನಡೆದ ಜಗಳದ್ಲಲಿ ತಾರಕಕ್ಕೆ ಮುಟ್ಟಿ ಅಪ್ಪ ಎರಡು ತಿಂಗಳು ಊರು ಬಿಟ್ಟು ಓಡಿ ಹೋಗಿತ್ತು. ಆನಂತರ ಊರಿನ ನಾರಾಯಣಪ್ಪ ಹುಡುಕಿ ಅಪ್ಪನನ್ನು ಕರೆದುತಂದ್ದಿದರು. ಹುಳುಕು ಮುಖದ ಅಪ್ಪ ಯಾವಾಗಲೂ ಬೀಡಿ ಸೇದುವುದು ಕೂಡ ಅಭ್ಯಾಸ ಮಾಡಿಕೊಂಡಿತ್ತು. ಪ್ರತಿ ದಿನ ಏನೆಂದರೂ ಮೂರು ನಾಲ್ಕು ಕಟ್ಟು ಬೀಡಿಗಳನ್ನು ಸೇದಲೇ ಬೇಕಿತ್ತು, ಬೀಡಿ ಸೇದಲು ಬಾಳೆಕಾಯಿ ತೂಕದ್ಲಲಿ ಸುಳ್ಳು ಲೆಕ್ಕ ಹೇಳುತ್ತಿತ್ತು ಅದು ಕೂಡ ಮನೆಯ್ಲಲಿ ಜಗಳದ ಕದನ ರೂಪಿಸಿ ಬಿಡುತ್ತಿತ್ತು.

ಮನೆಯ್ಲಲಿ ಜಗಳ ಆದಾಗಲ್ಲೆಲ ತಲೆಗೆ ಕಟ್ಟಿಕೊಂಡ ಟವೆಲ್‌ಅನ್ನು ಕೊಡವಿ ಮನೆಯಿಂದ ಆಚೆ ಬರುತ್ತ್ದಿದ ಅಪ್ಪ ಸುಮ್ಮನೆ ನಡೆದುಹೋಗಿ ಬಿಡುತ್ತ್ದಿದ. ತಾನೇ ದುಡಿದ, ತಾನೇ ಬೆಳೆದ ಬೆಳೆಯನ್ನು ಮಾರಲು ಆಗದಂಥ ಸ್ಥಿತಿಯ್ದಿದರೂ ಕಟ್ಟು ಬೀಡಿ ಇದರೆ ಅವನಿಗೆ ಸಾಕಾಗಿತ್ತು. ಆದರೆ ಕಟ್ಟು ಬೀಡಿಗಾಗಿ ಅಪ್ಪ ಬಾವಿಗೆ ಬ್ದಿದ್ದದು ಯಾಕೋ ? ಅದು ಸರಿ ಅಪ್ಪ ಬಾವಿಗೆ ಬೀಳುವ ಮುನ್ನ ನನ್ನನ್ನು ನೆನಪು ಮಾಡಿಕೊಂಡಿರಬಹುದೇ? ಕಾಳ ಯೋಚಿಸುತ್ತಲೇ ಇದ.

ಕಟ್ಟು ಬೀಡಿ ತಂದುಕೊಡಲ್ಲಿಲ ಎಂಬ ಒಂದೇ ಕಾರಣಕ್ಕೆ ಹಾಸಿಗೆ ಹಿಡಿದ್ದಿದ ಅಪ್ಪ ಬೆಳಗ್ಗೆ ಎದವನು ತಾನೇ ತೋಡಿಸ್ದಿದ ಬಾವಿಗೆ ಮಗುಚಿಕೊಂಡ್ದಿದ. ಬಾವಿಗೆ ಬೀಳುವ ಮುನ್ನ ಅಪ್ಪ ತನ್ನ ಮೊಂಡಾಸನ್ನು ಬಾವಿ ಕ್ಲಲಿನ ಮೇಲೆ ಇಟ್ಟ್ದಿದ. ಅಪ್ಪ ಮೊಂಡಾಸು ತೆಗೆಯುವಾಗ ಯಾರನ್ನು ನೆನಪುಮಾಡಿಕೊಂಡಿರಬಹುದು ಎಂಬುದೇ ಕಾಳನಿಗೆ ಕಾಡಲು ಶುರುಹಚ್ಚಿತು.
ಮುಂದುವರೆಯುವುದು